ADVERTISEMENT

‘ಭಾವಾರ್ಣವ-’ ಗೀತೋತ್ಸವ -2014

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಮಾ.8 ಮತ್ತು 9ರಂದು ಸಂಜೆ 4ಕ್ಕೆ ಬಸವನಗುಡಿಯ ಕಹಳೆಬಂಡೆ ಉದ್ಯಾನದಲ್ಲಿ ‘ಭಾವಾರ್ಣವ’ ಗೀತೋತ್ಸವ ಆಯೋಜಿಸಲಾಗಿದೆ. ಕವಿ ಡಾ. ಎಚ್. ಎಸ್.ವೆಂಕಟೇಶ್‌ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಡಾ. ಕಾ. ವೆಂ ಶ್ರೀನಿವಾಸಮೂರ್ತಿ, ಅಧ್ಯಕ್ಷತೆಯನ್ನು ವಿಜಯ ಹಾವನೂರು ಒಕ್ಕೂಟದ ಅಧ್ಯಕ್ಷರು ಪಾಲ್ಗೊಳ್ಳುತ್ತಲಿದ್ದು. ಮುಖ್ಯ ಅತಿಥಿಗಳಾಗಿ. ಡಾ. ಜಯಶ್ರೀ ಅರವಿಂದ್, ತಿಮ್ಮೇಶ್ ಭಾಗವಹಿಸುವರು. ಅಧ್ಯಕ್ಷತೆಯನ್ನು ಕವಿ ಪ್ರೊ. ದೊಡ್ಡರಂಗೇಗೌಡ ವಹಿಸುವರು.

ಕಾರ್ಯಕ್ರಮದಲ್ಲಿ ಹಿರಿಯ ಸುಗಮ ಸಂಗೀತ ಗಾಯಕ ಸೋಮಸುಂದರಂ ಹಾಗೂ ಬಾಗೂರು ಮಾರ್ಕಾಂಡೇಯ ಅವರಿಗೆ ಸನ್ಮಾನ ನಡೆಯಲಿದೆ. ಗಾಯನ ಕಾರ್ಯಕ್ರಮಗಳಲ್ಲಿ ವಿಜಯ ಹಾವನೂರು, ಇಂದು ವಿಶ್ವನಾಥ್, ಡಾ. ರೋಹಿಣಿ ಮೋಹನ್, ಡಾ. ಶಮಿತಾ ಮಲ್ನಾಡ್, ಟಿ. ರಾಜಾರಾಮ್, ವೆಂಕಟೇಶ ಆಲ್ಕೋಡ, ಆನಂದ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ, ರಾಜೇಂದ್ರ ಬೆಂಡೆ, ದಿವಾಕರ ಕ್ಯಪ್, ಉಷಾ ಉಮೇಶ್, ಇಂಚರ ಪ್ರವೀಣ್‌ಕುಮಾರ್, ವರ್ಷ ಬಿ. ಸುರೇಶ್, ಪೂಜಾ ತಾಯೂರ್, ಕಾವೇರಿ ಅಯ್ಯಪ್ಪ, ಮಹೇಶ್, ರಕ್ಷಿತ್, ವೈಷ್ಣವರಾವ್, ಗೀತಾ ಸತ್ಯಮೂರ್ತಿ, ಹೇಮಾಪ್ರಸಾದ್, ವಸಂತಲಕ್ಷ್ಮೀ, ರವೀಂದ್ರ ಸೋರಗಾಂವಿ, ಮಂಗಳಾ ರವಿ, ಬಂಡ್ಳಹಳ್ಳಿ ವಿಜಯಕುಮಾರ್, ಹಿರೇಮಗಳೂರು ಪ್ರವೀಣ್, ನರಹರಿ ದೀಕ್ಷಿತ್, ಗಣೇಶ ದೇಸಾಯಿ, ಪಂಚಮ ಹಳಿಬಂಡಿ, ಶ್ರೀಧರ್ ಅಯ್ಯರ್, ವೀರೇಶ ಬಳ್ಳಾರಿ, ನರಸಿಂಹ ಹರೀಶ್ ಭಾಗವಹಿಸುವರು.



 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.