ADVERTISEMENT

ಹೆಣ್ಣೂರು ರಸ್ತೆ ನಿಂತಿದ್ದ ಲಾರಿಗಳ ತೆರವು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:52 IST
Last Updated 12 ಮಾರ್ಚ್ 2019, 19:52 IST
ಹೆಣ್ಣೂರು ವೃತ್ತದ ಮೇಲುಸೇತುವೆ ಕೆಳಗೆ ನಿಲ್ಲಿಸಿದ್ದ ಲಾರಿಗಳನ್ನು ತೆರವುಗೊಳಿಸಿರುವುದು
ಹೆಣ್ಣೂರು ವೃತ್ತದ ಮೇಲುಸೇತುವೆ ಕೆಳಗೆ ನಿಲ್ಲಿಸಿದ್ದ ಲಾರಿಗಳನ್ನು ತೆರವುಗೊಳಿಸಿರುವುದು   

ಹೆಣ್ಣೂರು ವೃತ್ತದ ರಿಂಗ್‌ ರಸ್ತೆಯ ಮೇಲುಸೇತುವೆ ಕೆಳಭಾಗದ ರಸ್ತೆಯಲ್ಲಿ ಏಕವಾಗಿ ನಿಲ್ಲಿಸಲಾಗಿದ್ದ ಮರಳು ಮತ್ತು ಜಲ್ಲಿಕಲ್ಲು ತುಂಬಿದ್ದ ಲಾರಿಗಳನ್ನು ಸಂಚಾರ ಪೊಲೀಸರು ಮಂಗಳವಾರ ತೆರವುಗೊಳಿಸಿದ್ದಾರೆ.

ಬೆಳಿಗ್ಗೆಯಿಂದ ರಾತ್ರಿಯವರೆಗೆ ದಿನದ 24 ಗಂಟೆಯೂ ಈ ಜಾಗದಲ್ಲಿ ಲಾರಿಗಳು ನಿಂತುಕೊಳ್ಳುತ್ತಿದ್ದವು. ಇಲ್ಲಿಯೇ ಮರಳು, ಜಲ್ಲಿಕಲ್ಲು ವ್ಯಾಪಾರ ನಡೆಯುತ್ತಿತ್ತು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗುತ್ತಿತ್ತು. ಇತರ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ಕಿರಿ ಕಿರಿಯಾಗುತ್ತಿತ್ತು.

ಈ ಕುರಿತು ‘ಮೆಟ್ರೊ’ ಪುರವಣಿ ಮಾರ್ಚ್‌ 11ರಂದು ‘ಇದೇನು ಲಾರಿಗಳ ನಿಲ್ದಾಣವಾ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಬಾಣಸವಾಡಿ ಸಂಚಾರ ವಲಯದ ಪೊಲೀಸರು ಮೇಲುಸೇತುವೆ ಕೆಳಗೆ ಸರತಿಯಲ್ಲಿ ನಿಲ್ಲಿಸಿದ್ದ ಲಾರಿಗಳನ್ನು ಅಲ್ಲಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.