ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 4–9–1995

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:38 IST
Last Updated 3 ಸೆಪ್ಟೆಂಬರ್ 2020, 15:38 IST
   

ಹೋರಾಟ ಮುನ್ನಡೆ ನಿರ್ಧಾರ

ಬೆಂಗಳೂರು, ಸೆ. 3– ಅಂತರರಾಜ್ಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಲಿಯ ಕಲಾಪ ಬಹಿಷ್ಕರಿಸಬೇಕೆಂಬ ತಮ್ಮ ಬೇಡಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ಒಪ್ಪಲಿಲ್ಲವಾದ್ದರಿಂದ, ಕಾವೇರಿ ಹೋರಾಟ ಮುಂದುವರಿಸಲು ಕನ್ನಡ ಚಳವಳಿಗಾರರು ನಿರ್ಧರಿಸಿದ್ದಾರೆ.

‘ದ್ರೋಣ’ನಿಗೆ ಸ್ವಾಗತ ನಾಡಹಬ್ಬಕ್ಕೆ ನಾಂದಿ

ADVERTISEMENT

ಮೈಸೂರು, ಸೆ. 3– ಅರಮನೆಯ ಜಯ ಮಾರ್ತಾಂಡ ಮಹಾದ್ವಾರದ ಮೂಲಕ ಸಾಂಪ್ರದಾಯಿಕವಾಗಿ ಆನೆಗಳಿಗೆ ಸ್ವಾಗತ ಕೋರುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಿದ್ದರಾಮಯ್ಯ, ಅಂಬಾರಿ ಹೊರುವ ದ್ರೋಣನಿಗೆ ಪೂರ್ವ ದಿಕ್ಕಿಗಿರುವ ದ್ವಾರದ ಬಳಿ ಹಾರ ಹಾಕಿ ಸ್ವಾಗತಿಸಿದರು.

ಗಜ ಗಾಂಭೀರ್ಯಕ್ಕೆ ಪ್ರಸಿದ್ಧನಾದ ದ್ರೋಣ, ಸಚಿವರು ನೀಡಿದ ಪ್ರೀತಿಪಾತ್ರ ತಿನಿಸಾದ ಕಬ್ಬು–ಬೆಲ್ಲವನ್ನು ರಾಜಠೀವಿಯಿಂದ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಹಾಕಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.