‘ಲವ್ಜಿಹಾದ್’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ. ಜೈಪುರದಿಂದ ಅಜ್ಮೇರ್ಗೆಸಾಗುತ್ತಿದ್ದ ರೈಲಿನಲ್ಲಿ ಮುಸ್ಲಿಂ ಪುರುಷನ ಜೊತೆ ಹಿಂದೂ ಯುವತಿಯೊಬ್ಬಳು ಪ್ರಯಾಣಿಸುತ್ತಿರುವ ಕುರಿತು ಸುಳಿವು ಸಿಗುತ್ತಲೇ ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡು ರೈಲ್ವೇ ಪೊಲೀಸ್ ಠಾಣೆಗೆ (ಜಿಆರ್ಪಿಎಫ್) ಒಪ್ಪಿಸಿರುವುದಾಗಿ ಬಜರಂಗದಳದ ಸದಸ್ಯರು ಹೇಳಿದ್ದಾರೆ.ಆ ಕುರಿತ ವರದಿಯನ್ನು ಹಲವಾರು ಸ್ಥಳೀಯ ಪತ್ರಿಕಾ ವೆಬ್ಸೈಟ್ಗಳ ಪ್ರಕಟಿಸಿವೆ. ಈ ವರದಿಯನ್ನು ಸಾಕಷ್ಟು ಫಾಲೋಯರ್ಗಳನ್ನು ಹೊಂದಿರುವ ಟ್ವಿಟರ್ ಮತ್ತು ಫೇಸ್ಬುಕ್ ಪುಟಗಳು ಹಂಚಿಕೊಂಡಿವೆ.
ಇದು ‘ಲವ್ಜಿಹಾದ್’ ಪ್ರಕರಣವಲ್ಲ ಎಂದು ಆಲ್ಟ್ ನ್ಯೂಸ್ ವೇದಿಕೆ ವರದಿ ಮಾಡಿದೆ. ಉಜ್ಜೈನ್ನಜಿಆರ್ಪಿ ಇನ್ಸ್ಪೆಕ್ಟರ್ ಆರ್.ಎಸ್. ಮಹಾಜನ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ಘಟನೆ ಜ.14ರಂದು ನಡೆದಿದೆ. ಮಹಿಳೆ ಮತ್ತು ಪುರಷ ಇಬ್ಬರೂ ವಿವಾಹಿತರು. ಅವರಿಬ್ಬರೂ ರೈಲಿನ ಒಂದೇ ಬೋಗಿಯಲ್ಲಿ ಇಂದೋರ್ನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದರು. ಇಬ್ಬರ ಕುಟುಂಬಗಳೂ ಪರಸ್ಪರ ಪರಿಚಿತ ಕುಟುಂಬಗಳಾಗಿದ್ದವು. ಈ ಪ್ರಕರಣದಲ್ಲಿ ‘ಲವ್ಜಿಹಾದ್’ ಅಂಶವಿರಲಿಲ್ಲ. ಕೂಡಲೇ ಅವರಿಬ್ಬರನ್ನೂ ಬಿಡುಗಡೆ ಮಾಡಲಾಗಿತು ಎಂದು ಮಹಾಜನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.