ADVERTISEMENT

ಮಕ್ಕಳ ಅಪಹರಣ ಬಗ್ಗೆ ವೈರಲ್ ಸಂದೇಶ 'ಸುಳ್ಳು' ಎಂದ ಬೆಂಗಳೂರು ಪೊಲೀಸ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 15:41 IST
Last Updated 31 ಜುಲೈ 2019, 15:41 IST
   

ಬೆಂಗಳೂರು: ನಾಗರಬಾವಿ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಪ್ರೀಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ್ದಾರೆ ಎಂಬ ವೈರಲ್ ಸಂದೇಶ ಸುಳ್ಳು ಎಂದು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಕ್ಕಳ ಅಪಹರಣ ಬಗ್ಗೆ ಹೀಗೊಂದು ವದಂತಿ ಹಬ್ಬಿದ್ದು ಎರಡನೇ ಬಾರಿ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಅದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿ ಸುಳ್ಳು ಸಂದೇಶಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ವೈರಲ್ ಸಂದೇಶ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್, ಇದೇ ಸಂದೇಶದಲ್ಲಿರುವ ಬರಹವಿರುವ ಹಲವಾರು ಪೋಸ್ಟ್‌ಗಳನ್ನು ಪತ್ತೆ ಹಚ್ಚಿದೆ.

ನಾಗರಬಾವಿಯಲ್ಲಿರುವಪ್ರೀಸ್ಕೂಲ್ ವಿದ್ಯಾರ್ಥಿನಿಯ ಫೋಟೊ ಇರುವ ಈ ಸಂದೇಶ ವದಂತಿಯಾಗಿದ್ದು, ಶಾಲೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.