ADVERTISEMENT

ಯಾದವ ಸಮುದಾಯದ ವ್ಯಕ್ತಿಯ ತಲೆ ಬೋಳಿಸಿದ್ದಕ್ಕೆ ಪ್ರತಿಭಟನೆ: ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 23:15 IST
Last Updated 2 ಜುಲೈ 2025, 23:15 IST
..
..   

ಭಾರಿ ಸಂಖ್ಯೆಯ ಜನ ರ್‍ಯಾಲಿಯೊಂದರಲ್ಲಿ ಭಾಗವಹಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ, ಉತ್ತರ ಪ್ರದೇಶದ ಇಟಾವಾ ಬಳಿಯ ಹಳ್ಳಿಯೊಂದರಲ್ಲಿ ಭಾಗವತ ಕಥಾ ವಾಚನದ ವೇಳೆ ಪ್ರಬಲ ಸಮುದಾಯದವರು ಯಾದವ ಸಮುದಾಯದ ವ್ಯಕ್ತಿಯೊಬ್ಬರ ತಲೆಗೂದಲು ಬೋಳಿಸಿದ್ದರು. ಆ ಘಟನೆಗೆ ಸಂಬಂಧಿಸಿದ ವಿಡಿಯೊ ಇದಾಗಿದ್ದು, ಘಟನೆಯ ವಿರುದ್ಧ ಯಾದವ ಸಮುದಾಯವು ಪ್ರತಿಭಟನೆ ನಡೆಸಿತು ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಇದೇ ವಿಡಿಯೊ ಅನ್ನು ಇಂತಹುದೇ ಪ್ರತಿಪಾದನೆಯೊಂದಿಗೆ ಹಲವರು ಹಂಚಿಕೊಂಡಿರುವುದು ಕಂಡುಬಂತು. ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ರಾಜಸ್ಥಾನದ ಶೆವೊ ಕ್ಷೇತ್ರದ ಶಾಸಕ ರವೀಂದ್ರ ಸಿಂಗ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೊ ಅನ್ನು 2024ರ ಏಪ್ರಿಲ್ 4ರಂದು ಹಂಚಿಕೊಂಡಿರುವುದು ಕಂಡುಬಂತು. ಅದು ಶಾಸಕರು ಆಯೋಜಿಸಿದ್ದ ರ್‍ಯಾಲಿಯಾಗಿದ್ದು, ಇಟಾವಾ ಘಟನೆಗೂ ಅದಕ್ಕೂ ಸಂಬಂಧವಿಲ್ಲ ಎನ್ನುವುದು ಖಚಿತವಾಯಿತು. ಕೆಲವರು ಹಳೆಯ ವಿಡಿಯೊ ಅನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT