ಮುಂಬೈ (ಐಎಎನ್ಎಸ್): ಆದರ್ಶ ವಸತಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ವಿಚಾರಣೆಗಾಗಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದೆ.
`ಮಹಾನಗರ ಪಾಲಿಕೆಯ ಮಾಜಿ ಆಯುಕ್ತ ಜೈರಾಜ್ ಪಾಠಕ್ ಮತ್ತು ನಿವೃತ್ತ ಮಾಹಿತಿ ಆಯುಕ್ತ ರಾಮಾನಂದ್ ತಿವಾರಿ ಅವರನ್ನು ವಿಚಾರಣೆಗೆ ಗುರಿ ಪಡಿಸಲಾಗಿದೆ~ ಎಂದು ಸಿಬಿಐ ಮೂಲಗಳು ಹೇಳಿವೆ. ಈ ಸಮುಚ್ಚಯದಲ್ಲಿ ಪಾಠಕ್ ಅವರ ಮಗನಿಗೆ ಫ್ಲಾಟ್ವೊಂದನ್ನು ಮಂಜೂರು ಮಾಡಲಾಗಿದೆ. ತಿವಾರಿ ಅವರ ಪುತ್ರನಿಗೂ ಇಲ್ಲಿ ಫ್ಲಾಟ್ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.