ADVERTISEMENT

ಇಶ್ರತ್ ಎನ್‌ಕೌಂಟರ್ ತನಿಖೆ ಮುಕ್ತಾಯಕ್ಕೆ ಹೈಕೋರ್ಟ್ ಗಡುವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಅಹಮದಾಬಾದ್ (ಪಿಟಿಐ): ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ತನಿಖೆಯಿಂದ ಐಪಿಎಸ್ ಅಧಿಕಾರಿ ಸತೀಶ್ ವರ್ಮಾ ಅವರನ್ನು ಹೊರಗಿಡಬೇಕು ಎಂಬ ಸಿಬಿಐ ಮನವಿಯನ್ನು ಒಪ್ಪಿಕೊಂಡ ಗುಜರಾತ್ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿ ಜುಲೈ 4ರ ವೇಳೆಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ವರ್ಮಾ ಅವರು ಎನ್‌ಕೌಂಟರ್ ಪ್ರಕರಣದ ವಿಶೇಷ ತನಿಖಾ ತಂಡದಲ್ಲಿ ಇದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಆಗಲೂ ವರ್ಮಾ ಅವರನ್ನು ಸಿಬಿಐ ತನಿಖಾ ತಂಡದಲ್ಲಿ ಮುಂದುವರಿಸಲಾಗಿತ್ತು.

ಇಶ್ರತ್ , ಜಾವೇದ್ ಶೇಖ್, ಅಮ್ಜದ್ ಅಲಿ ರಾಣಾ, ಜೀಸ್‌ಹಾನ್ ಜೋಹರ್ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟು ನಂತರ ನಕಲಿ ಎನ್‌ಕೌಂಟರ್‌ನಲ್ಲಿ ಇಶ್ರತ್ ಹತ್ಯೆ ಮಾಡಿರುವ ಆಪಾದನೆಯ ಬಗ್ಗೆ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.