ADVERTISEMENT

ಉಗ್ರರನ್ನು ಥಳಿಸಿ ಕೊಂದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಗುವಾಹಟಿ (ಐಎಎನ್‌ಎಸ್‌):   ಮೇಘಾಲಯ ಮೂಲದ ಉಗ್ರರ ಸಂಘಟನೆ  ಮೂವರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಕೊಂದು ಹಾಕಿದ  ಘಟನೆ ಅಸ್ಸಾಂ –ಮೇಘಾಲಯ ಗಡಿಯ ಗ್ರಾಮವೊಂದರಲ್ಲಿ  ಮಂಗಳವಾರ ನಡೆದಿದೆ.

ಗ್ರಾಮಸ್ಥರನ್ನು ಬೆದರಿಸಿ ಹಣ ಕೀಳಲು ಬಂದ ಯುನೈಟೆಡ್‌ ಅಚಿಕ್‌ ಲಿಬರೇಷನ್‌ ಆರ್ಮಿಯ (ಯುಎಎಲ್‌ಎ) ಮೂವರನ್ನು ಸ್ಥಳೀಯರು ಹಿಡಿದು ಮನಬಂದಂತೆ ಥಳಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.