ADVERTISEMENT

ಏ. 15ರಿಂದ ಪ್ರಣವ್ 3ದಿನ ಈಶಾನ್ಯ ರಾಜ್ಯಗಳ ಪ್ರವಾಸ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 11:06 IST
Last Updated 14 ಏಪ್ರಿಲ್ 2013, 11:06 IST

ನವದೆಹಲಿ (ಐಎಎನ್‌ಎಸ್):ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೋಮವಾರದಿಂದ ಮೂರು ದಿನಗಳವರೆಗೆ ಮಣಿಪುರ ಮತ್ತು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಭಾನುವಾರ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಇಂಫಾಲ್‌ನಲ್ಲಿನ ಅದಿಮ್‌ಜತಿ ಶಿಕ್ಷಾ ಆಶ್ರಮದ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಅವರು ಭಾಗವಹಿಸಲಿದ್ದಾರೆ. ನಂತರ ಎಸ್/ಎಸ್‌ಟಿ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ಹಾಗೂ ಬುಡಕಟ್ಟು  ಬಾಲಕರ ಹಾಸ್ಟೆಲ್ ಮತ್ತು ಮಹಿಳಾ ಕೆಲಸಗಾರರ ಹಾಸ್ಟೆಲ್ ಕಟ್ಟಡಗಳ ಅಡಿಗಲ್ಲು ಸ್ಥಾಪನೆ ಸೇರಿದಂತೆ ಮೂರು ದಿನ ಈಶಾನ್ಯ ರಾಜ್ಯಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಣವ್ ಭಾಗವಹಿಸಲಿದ್ದಾರೆ ಎಂದು ರಾಷ್ಟಪತಿ ಭವನದ ಮೂಲಗಳು ತಿಳಿಸಿವೆ.

ಏ. 17ರಂದು ರಾಷ್ಟ್ರಪತಿ ಅವರು ದೆಹಲಿಗೆ ಹಿಂದಿರುಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT