ಭುವನೇಶ್ವರ (ಪಿಟಿಐ): ಒಳ್ಳೆಯ ರಕ್ಷಣಾ ವ್ಯವಸ್ಥೆ ಇದ್ದರೂ ಒಡಿಶಾದಲ್ಲಿ ಪ್ರತಿವರ್ಷ ಪ್ರವಾಹದಿಂದ ಸರಾಸರಿ 33 ಮಂದಿ ಸಾವನ್ನಪ್ಪುತ್ತಾರೆ ಹಾಗೂ ರೂ. 322 ಕೋಟಿಯಷ್ಟು ಆಸ್ತಿ ನಾಶವಾಗುತ್ತದೆ.
ಮುಂಗಾರಿನಲ್ಲಿ ಮಹಾನದಿ, ಸುಬರ್ಣರೇಖಾ, ಬ್ರಹ್ಮಣಿ, ಬೈತರಣಿ, ವಂಶಧಾರಾ ಮತ್ತು ಋಶಿಕುಲ್ಯ ನದಿಗಳ ಪ್ರವಾಹದಿಂದಾಗಿ ಆಸ್ತಿಪಾಸ್ತಿ ಮತ್ತು ಪ್ರಾಣಹಾನಿಗಳು ಉಂಟಾಗುತ್ತವೆ.
`1980 ಮತ್ತು 2011 ರ ನಡುವೆ ಪ್ರವಾಹದಿಂದ ಒಟ್ಟು 1,043 ಮಂದಿ ಮೃತಪಟ್ಟಿದ್ದು ಇದೇ ಕಾಲಾವಧಿಯಲ್ಲಿ ರಾಜ್ಯದಲ್ಲಿ ರೂ. 10,000 ಕೋಟಿ ಮೌಲ್ಯದ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ~ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.