ADVERTISEMENT

ಕಡಲ್ಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST

ನವದೆಹಲಿ: ಏಡನ್ ಕೊಲ್ಲಿ ಬಳಿ ಭಾರತದ ಸರಕು ಸಾಗಣೆ ಹಡಗೊಂದನ್ನು ದೋಚಲು ಪ್ರಯತ್ನಿಸಿದ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧಿಸಿದ್ದಾರೆ.

ಕಡಲ್ಗಳ್ಳರು ಸಣ್ಣ ದೋಣಿ ಮತ್ತು ಏಣಿ ಬಳಸಿ ಭಾರತದ ಎಂ.ವಿ. ಜಗ್ ಅಮರ್ ಸರಕು ಸಾಗಣೆ ಹಡಗನ್ನು ಏರಿದ್ದರು. ಸಿಬ್ಬಂದಿಯನ್ನು ಬೆದರಿಸಿ ಹಡಗನ್ನು ದೋಚಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್‌ ತ್ರಿಶೂಲ್‌ ಯುದ್ಧನೌಕೆಯು ಹಡಗನ್ನು ಸಮೀಪಿಸಿತು ಎಂದು ಮೂಲಗಳು ಹೇಳಿವೆ. ನಂತರ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12 ಕಡಲ್ಗಳ್ಳರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT