ನವದೆಹಲಿ: 73 ಗಂಟೆಗಳ ಕಾಲ ನೈಜೀರಿಯಾದ ಕಡಲ್ಗಳ್ಳರ ಸರೆಯಿಲ್ಲಿದ್ದು ಬಿಡುಗಡೆಯಾಗಿದ್ದ ಭಾರತದ ಮೂವರು ಯುವಕರು ಭಾನುವಾರ ತಡರಾತ್ರಿ ದೇಶಕ್ಕೆ ಮರಳಿದ್ದಾರೆ.
ನೈಜೀರಿಯಾದ ವ್ಯಾಪಾರಿ ನೌಕಾಪಡೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಸುಶೀಲ್ ಕುಮಾರ್, ಪಂಕಜ್ ಕುಮಾರ್ ಮತ್ತು ಅಜಯ್ ಕುಮಾರ್ ಅವರನ್ನು ಕಡಲ್ಗಳ್ಳರು ಸೆರೆಯಲ್ಲಿರಿಸಿಕೊಂಡಿದ್ದರು.
ಸದ್ಯ ಹಿಮಾಚಲ ಪ್ರದೇಶದ ಪಾಲಂಪೋರ್ಗೆ ಮರಳಿರುವ ಅಜಯ್ ಕುಮಾರ್ ಸೆರೆಯಲ್ಲಿದ್ದ ಮೂರುದಿನಗಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರು, ‘ದೇವರು ಮತ್ತು ಸರ್ಕಾರವನ್ನು ನಾನು ನಂಬಿದ್ದೆ. ಅವರು ಒಂದಲ್ಲ ಒಂದು ದಿನ ನಮ್ಮನ್ನು ಬಿಡುಗಡೆಗೊಳಿಸಲಿದ್ದಾರೆ ಎಂಬ ವಿಶ್ವಾಸವಿತ್ತು’ ಎಂದು ಹೇಳಿದ್ದಾರೆ.
ಯುವಕರು ಬಿಡುಗಡೆಯಾಗಿರುವ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಏಪ್ರಿಲ್ 11ರಂದು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದರು. ಜತೆಗೆ ಯುವಕರ ಬಿಡುಗಡೆಗಾಗಿ ಶ್ರಮಿಸಿದ್ದ ನೈಜೀರಿಯಾದಲ್ಲಿನ ಭಾರತೀಯ ಹೈಕಮಿಷನರ್ ಬಿ.ಎನ್. ರೆಡ್ಡಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.