
ಪ್ರಜಾವಾಣಿ ವಾರ್ತೆಲಖನೌ (ಪಿಟಿಐ): ಕರ್ನಾಟಕ ಮೂಲದ ರೌಡಿಯೊಬ್ಬನ ನಿಕಟ ಸಹಚರನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕ್ರಿಯಾ ಪಡೆ ಶುಕ್ರವಾರ ಬಂಧಿಸಿದೆ.
ಭೂಗತ ದೊರೆ ರಾಜಾ ಬೊನಾಂಜಾನ ನಿಕಟವರ್ತಿಯಾಗಿರುವ ಜಾವೇದ್ ಅಲಿಯಾಸ್ ಅಜಯ್ನನ್ನು ಇಲ್ಲಿನ ಗೋಮತಿ ನಗರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರಾಣಸಿ ನಿವಾಸಿ ಜಾವೇದ್ನನ್ನು ಮಂಗಳೂರು ಪೊಲೀಸರ ಮನವಿ ಮೇರೆಗೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಬ್ರಿಜ್ಲಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.