ಆಗ್ರಾ (ಪಿಟಿಐ): `ಕಳಂಕರಹಿತರಷ್ಟೇ ಚುನಾವಣೆಗೆ ಸ್ಪರ್ಧಿಸುವಂತಾಗಬೇಕು. ಆಗ ಮಾತ್ರ ನಾಗರಿಕರಲ್ಲಿ ಪ್ರಜಾಪ್ರಭುತ್ವದ ಮೇಲಿರುವ ವಿಶ್ವಾಸ ಪುನರ್ಸ್ಥಾಪಿಸಲು ಸಾಧ್ಯ' ಎಂದು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ನಸೀಮ್ ಜೈದಿ ಹೇಳಿದರು.
ಇಲ್ಲಿ ಆಯೋಜಿಸಿದ್ದ `ಕ್ರಮಬದ್ಧ ಮತದಾನ ಶಿಕ್ಷಣ ಹಾಗೂ ಮತದಾರರ ಭಾಗವಹಿಸುವಿಕೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಶಿಕ್ಷೆ ಅನುಭವಿಸಿದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಹಾಗೂ ಈಗಾಗಲೇ ಆಯ್ಕೆಯಾದ ಕ್ರಿಮಿನಲ್ ಹಿನ್ನೆಲೆ ಇರುವ ಜನಪ್ರತಿನಿಧಿಗಳನ್ನು ಉಚ್ಚಾಟಿಸಬೇಕು' ಎಂಬ ಸುಪ್ರೀಂ ಕೋರ್ಟ್ನ ತೀರ್ಪು ಸ್ವಾಗತಾರ್ಹ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.