ADVERTISEMENT

ಕಾಂಗ್ರೆಸ್‌–ಎಎಪಿ ಮೈತ್ರಿ: ಇಂದು ಅಂತಿಮ ನಿರ್ಧಾರ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 5:13 IST
Last Updated 20 ಮಾರ್ಚ್ 2019, 5:13 IST
   

ನವದೆಹಲಿ: ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿಯ ಮಾತುಕತೆ ಮರುಜೀವ ಪಡೆದಿದೆ.ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಶಾನ್ಯ ರಾಜ್ಯಗಳ ಪ್ರವಾಸದಿಂದ ಬುಧವಾರ ಹಿಂದಿರುಗಲಿದ್ದಾರೆ. ಬಳಿಕ ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರ ಆಗಬಹುದು ಎನ್ನಲಾಗಿದೆ.

ಮೈತ್ರಿ ಇಲ್ಲ ಎಂದು ಎರಡೂ ಪಕ್ಷಗಳು ಹಲವು ಬಾರಿ ಹೇಳಿವೆ. ಹಾಗಿದ್ದರೂ ಮೈತ್ರಿಗಾಗಿ ಹಿಂಬಾಗಿಲ ಪ್ರಯತ್ನಗಳು ನಡೆಯುತ್ತಿವೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ರಾಹುಲ್‌ ಅವರನ್ನು ಭೇಟಿಯಾದ ಬಳಿಕ ಎಎಪಿಯ ಸಂಜಯ್‌ ಸಿಂಗ್ ಅವರನ್ನು ಭೇಟಿಯಾದರು. ಕಾಂಗ್ರೆಸ್‌ ಹೈಕಮಾಂಡ್‌ಗೆ ಮೈತ್ರಿಗೆ ಒಲವು ಇದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT