ADVERTISEMENT

ಕಾಂಗ್ರೆಸ್ ಸಂಸದರಿದ ಲಂಚದ ಆಮಿಷ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ರಾಂಚಿ (ಐಎಎನ್‌ಎಸ್): `ರಾಜ್ಯಸಭಾ ಚುನಾವಣೆ ವೇಳೆ ತಮ್ಮ ಪರವಾಗಿ ಮತ ಹಾಕುವಂತೆ ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಧೀರಜ್ ಸಾಹು ನನಗೆ 25 ಲಕ್ಷ ರೂಪಾಯಿ ಲಂಚದ ಆಮಿಷವೊಡ್ಡಿದ್ದರು~ ಎಂದು ಅದೇ ಪಕ್ಷದ ಶಾಸಕ ಚಂದ್ರಶೇಖರ ದುಬೆ ಸೋಮವಾರ ಆರೋಪಿಸಿದ್ದಾರೆ.

2010ರಲ್ಲಿ ಜಾರ್ಖಂಡ್‌ನಲ್ಲಿ ರಾಜ್ಯಸಭಾ ಚುನಾವಣೆ ರದ್ದುಪಡಿಸಿರುವ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ತನಿಖೆ ನಡೆಸುತ್ತಿರುವ ಮಧ್ಯೆಯೇ ದುಬೆ ಸುದ್ದಿವಾಹಿನಿಗೆ ಈ ಹೇಳಿಕೆ ನೀಡಿದ್ದಾರೆ.

ಆದರೆ ಸಾಹು ಈ ಆರೋಪವನ್ನು ಅಲ್ಲಗಳೆದಿದ್ದಾರೆ. `ನಾನು  ಪಕ್ಷದ ಅಭ್ಯರ್ಥಿ. ಹೀಗಾಗಿ ನನ್ನ ಪರ  ಮತ ಹಾಕುವಂತೆ ಸ್ವಂತ ಪಕ್ಷದ ಅಭ್ಯರ್ಥಿಗೇಕೆ ಹಣ ನೀಡಲಿ~ ಎಂದು ಸಾಹು ಪ್ರಶ್ನಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.