ADVERTISEMENT

ಕಾರ್ಮಿಕ ನಾಯಕ ಕೆ.ರಾಮದಾಸ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ತಿರುವನಂತಪುರಂ (ಪಿಟಿಐ): ಕೇರಳದ ಮಾಜಿ ಶಾಸಕ ಹಾಗೂ ಹಿರಿಯ ಕಾರ್ಮಿಕ ನಾಯಕ ಕೋಸಲ ರಾಮದಾಸ್ (86) ಸೋಮವಾರ ರಾತ್ರಿ ನಿಧನರಾದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮದಾಸ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

1967ರಲ್ಲಿ ಕೇರಳದ ತಿರುವನಂತ ಪುರಂ ಜಿಲ್ಲೆಯ ಅತ್ತಿನ್‌ಗಲ್ ಕ್ಷೇತ್ರದ ಸಿಪಿಎಂ  ಶಾಸಕರಾಗಿ ರಾಮದಾಸ್ ಆಯ್ಕೆಯಾಗಿದ್ದರು. ಆದರೆ, ನಕ್ಸಲ್ ಪರವಾಗಿದ್ದ ಅವರ ಧೋರಣೆಯನ್ನು ಪಕ್ಷ ಖಂಡಿಸಿತ್ತು. ಈ  ಹಿನ್ನೆಲೆಯಲ್ಲಿ ರಾಮದಾಸ್ ಶಾಸಕ ಸ್ಥಾನವನ್ನು ತ್ಯಜಿಸಿದ್ದರು.

ಕೆಲಕಾಲದ ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣ ನಕ್ಸಲ್ ಸಂಘಟನೆಯಿಂದ ಅವರು ಹೊರ ಬಂದಿದ್ದರು.  ನಂತರದ ದಿನಗಳಲ್ಲಿ ರಾಮದಾಸ್ ಅವರು, ಯಾವುದೇ ರಾಜಕೀಯ ಪಕ್ಷ ಸೇರದೇ ಸ್ವತಂತ್ರವಾಗಿ ಕಾರ್ಮಿಕ ಸಂಘಟನೆಯಲ್ಲಿ ತೊಡಗಿದ್ದರು. ಸಿಪಿಎಂನಲ್ಲಿದ್ದ ಸಮಯದಲ್ಲಿ ಅವರು ಕೆಲಕಾಲ ತಿರುವನಂತಪುರಂದ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.