ನವದೆಹಲಿ (ಪಿಟಿಐ/ ಐಎಎನ್ಎಸ್): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸಂಸತ್ತಿನಲ್ಲಿ ಮಂಡಿಸಿದ 2011-12ರ ಸಾಲಿನ ಮುಂಗಡಪತ್ರದ ಮುಖ್ಯಾಂಶಗಳು:
* ಮಹಿಳಾ ಸ್ವಸಹಾಯ ಅಭಿವೃದ್ಧಿಗಾಗಿ ತಜ್ಞರ ಸಮಿತಿ ರಚನೆ.
* ವಿದೇಶೀ ಸಾಂಸ್ಥಿಕ ಹೂಡಿಕೆಗಳಿಗೆ (ಎಫ್ ಐ ಐ) ಕಾರ್ಪೋರೇಟ್ ಬಾಂಡ್ ಗಳಲ್ಲಿ 40 ಶತಕೋಟಿ ಡಾಲರ್ ನಷ್ಟು ಹಣ ಹೂಡಲು ಅವಕಾಶ.
*ಕಿರು ಹಣಕಾಸು ಕಂಪೆನಿಗಳಿಗಾಗಿ 100 ಕೋಟಿ ರೂಪಾಯಿಗಳ ಈಕ್ವಿಟಿ ನಿಧಿ.
* ಆರ್ಥಿಕ ದುರ್ಬಲ ವರ್ಗಗಳಿಗಾಗಿ ಅಡಮಾನ ಅಪಾಯ/ ಸಾಹಸ ಖಾತರಿ ನಿಧಿ ರಚನೆ
*ಆದ್ಯತಾ ವರ್ಗದ ವಸತಿ ಸಾಲ ಮಿತಿ 25 ಲಕ್ಷ ರೂಪಾಯಿಗಳಿಗೆ ಏರಿಕೆ.
* ಅಭಿವೃದ್ಧಿಗೆ ಕೃಷಿ ಬೆಳವಣಿಗೆ ಅತ್ಯಗತ್ಯ: ಪೂರ್ವ ವಲಯದಲ್ಲಿ ಹಸಿರು ಕ್ರಾಂತಿಯ ನಿರೀಕ್ಷೆ.
* ಬೆಳವಣಿಗೆ ದರ ಹಾಲಿ ಶೇಕಡಾ 8.75ರಿಂದ 2011-12ರಲ್ಲಿ ಶೇಕಡಾ 9.25ಕ್ಕೆ ಏರುವ ನಿರೀಕ್ಷೆ.
*ವಿಮಾ, ಪಿಂಚಣಿ ನಿಧಿಗಳು, ಬ್ಯಾಂಕಿಂಗ್ ಸಂಬಂಧಿತ ಮಸೂದೆಗಳ ಮಂಡನೆ.
* ಸಗಟು ಮತ್ತು ಬಿಡಿ ಮಾರಾಟ ದರಗಳಲ್ಲಿನ ಅಂತರ ಸ್ವೀಕಾರಾರ್ಹ ಅಲ್ಲ
*ಸ್ವತಂತ್ರ ಸಾಲ ನಿರ್ವಹಣಾ ಕಚೇರಿಯ ಸ್ಥಾಪನೆ, ಸಂಸತ್ತಿನಲ್ಲಿ ಸರ್ಕಾರಿ/ ಸಾರ್ವಜನಕ ಸಾಲ ನಿರ್ವಹಣಾ ಮಸೂದೆ ಮಂಡನೆ.
* ಉತ್ತಮ ಮುಂಗಾರುವಿಗಾಗಿ ಹರಸುವಂತೆ ವರುಣದೇವನಿಗೆ ಪ್ರಾರ್ಥನೆ.
* ವಸ್ತುಗಳು ಮತ್ತು ಸೇವೆ ಪ್ರಸ್ತಾವನೆ ಮೂಲಕ ಅನುಸರಣೆ ಸುಧಾರಣೆ ಸಲುವಾಗಿ ಈ ಅಧಿವೇಶನದಲ್ಲೇ ಮಸೂದೆ: ಅನುಷ್ಠಾನಕ್ಕಾಗಿ ಬಲಾಢ್ಯ ಐಟಿ ಜಾಲ.
* ವಸ್ತುಗಳ ಉತ್ಪಾದನೆ ಮತ್ತು ಸೇವಾ ಹೆಚ್ಚಳಕ್ಕೆ ಅನುಕೂಲವಾಗುವಂತೆ ವೆಚ್ಚದ ಹೊಂದಾಣಿಕೆ
*ಸರ್ಕಾರಿ ರಂಗದ ಉದ್ಯಮಗಳಲ್ಲಿ ಶೇಕಡಾ 51ರ ಪಾಲುದಾರಿಕೆ ಉಳಿಸಿಕೊಳ್ಳಲು ಸರ್ಕಾರ ಬದ್ಧ.
* ವಿದೇಶೀ ನೇರ ಹೂಡಿಕೆ (ಎಫ್ ಡಿ ಐ) ನೀತಿಯ ಉದಾರೀಕರಣ.
* ಹಾಲಿ ಖೋತಾ 2009-10ರ ಮಟ್ಟದಲ್ಲಿ.
* ಭ್ರಷ್ಟಾಚಾರದ ಸಮಸ್ಯೆ ವಿರುದ್ಧ ನಮ್ಮೆಲ್ಲರ ಸಾಮೂಹಿಕವಾಗಿ ಹೋರಾಟ ಅಗತ್ಯ
* ಅಭಿವೃದ್ಧಿಗೆ ಹೆಚ್ಚು ಮಂದಿಯ ಒಳಗೊಳ್ಳುವಿಗೆ ಬೇಕು.
* ಬಲಾಢ್ಯ ಆರ್ಥಿಕ ಕ್ರೋಡೀಕರಣದ ಅಗತ್ಯ.
* ಹೊಸ ಸ್ಪಂದನಶೀಲ ಆರ್ಥಿಕತೆಗೆ ಒತ್ತು.
* ಆಂತರಿಕ ಮತ್ತು ಬಾಹ್ಯ ಹೊಡೆತಗಳನ್ನು ಎದುರಿಸಿಯೂ ಆರ್ಥಿಕತೆಯಲ್ಲಿ ಗಮನಾರ್ಹ ಚೇತರಿಕೆ.
* ಬಿಕ್ಕಟ್ಟು ಪೂರ್ವ ಪಥಕ್ಕೆ ಮರಳಿದ ಆರ್ಥಿಕ ಸ್ಥಿತಿ.
* ಎರಡಂಕಿ ಬೆಳವಣಿಗೆಯತ್ತ ಹೆಜ್ಜೆ.
* ಜನವರಿ ವೇಳೆಗೆ ಒಟ್ಟಾರೆ ಆಹಾರ ಹಣದುಬ್ಬರ ಶೇಕಡಾ 9ಕ್ಕಿಂತಲೂ ಕೆಳಕ್ಕೆ ಇಳಿಯುವ ನಿರೀಕ್ಷೆ.
* ಇನ್ನೂ ಉತ್ತಮ ಸಾಧನೆ ಸಾಧ್ಯವಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.