ADVERTISEMENT

ಜಾಮೀನಿಗಾಗಿ ಲಂಚ ಪ್ರಕರಣ: ಎಸಿಬಿ ಮುಂದೆ ಶ್ರೀರಾಮುಲು ಹಾಜರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 9:40 IST
Last Updated 21 ಆಗಸ್ಟ್ 2012, 9:40 IST
ಜಾಮೀನಿಗಾಗಿ ಲಂಚ ಪ್ರಕರಣ: ಎಸಿಬಿ ಮುಂದೆ ಶ್ರೀರಾಮುಲು ಹಾಜರು
ಜಾಮೀನಿಗಾಗಿ ಲಂಚ ಪ್ರಕರಣ: ಎಸಿಬಿ ಮುಂದೆ ಶ್ರೀರಾಮುಲು ಹಾಜರು   

ಹೈದರಾಬಾದ್  (ಐಎಎನ್ಎಸ್): ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೀಡಿರುವ ನೋಟಿಸ್‌ಗೆ ಉತ್ತರಿಸಲು ಕರ್ನಾಟಕದ ಮಾಜಿ ಸಚಿವ ಹಾಗೂ ಬಡವ ಶ್ರಮಿಕ ರೈತ ಪಕ್ಷದ (ಬಿಎಸ್ಆರ್) ಸ್ಥಾಪಕ ಬಿ. ಶ್ರೀರಾಮುಲು ಮಂಗಳವಾರ ಇಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಹಾಜರಾದರು.

ಪ್ರಕರಣಕ್ಕೆ ಸಂಬಂದಿಸಿದಂತೆ ಶ್ರೀರಾಮುಲು ಅವರಿಗೆ ಎಸಿಬಿಯು ಕಳೆದ ವಾರ ನೋಟಿಸ್ ಜಾರಿಗೊಳಿಸಿತ್ತು. ಇದರಿಂದಾಗಿ ಶ್ರೀರಾಮುಲು ಅವರು ಮಂಗಳವಾರ ಬೆಳಿಗ್ಗೆ ಎಸಿಬಿಯ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಎಸಿಬಿಯಿಂದ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರು ಜಿ. ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮುಲು ಅವರ ಮಾರ್ಗದರ್ಶನ ಇತ್ತು ಎಂದು ಎಸಿಬಿ ತನಿಖಾಧಿಕಾರಿಗಳ ಮುಂದೆ ಅವರು ಹೇಳಿಕೆಯನ್ನು ನೀಡಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ಹಾಗೂ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಎಸಿಬಿ ಅಧಿಕಾರಿಗಳು ಶ್ರೀರಾಮುಲು ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.