ADVERTISEMENT

ಜಾಮೀನಿಗೆ ಲಂಚ ಕೋರ್ಟ್‌ಗೆ ಯುವ ವಕೀಲ ಶರಣು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಹೈದರಾಬಾದ್ (ಪಿಟಿಐ): ಕರ್ನಾಟಕದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿರುವ ಒಬ್ಬ ಕಿರಿಯ ವಕೀಲ ಗುರುವಾರ ಭ್ರಷ್ಟಾಚಾರ ತಡೆ ಬ್ಯೂರೊ ನ್ಯಾಯಾಲಯಕ್ಕೆ ಶರಣಾದರು.

ಶರಣಾದ ವಕೀಲ ಆದಿತ್ಯ ಅವರನ್ನು ನ್ಯಾಯಾಲಯವು ಆ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜನಾರ್ದನ ರೆಡ್ಡಿ ಪರ ವಕೀಲರಾದ ಇ.ಉಮಾಮಹೇಶ್ವರ ರಾವ್ ಅವರೊಂದಿಗೆ ಈ ವಕೀಲ ಕೆಲಸ ಮಾಡುತ್ತಿದ್ದರು.

ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ ರೌಡಿ ಶೀಟರ್ ಯಾದಗಿರಿ, ಪೊಲೀಸ್ ತನಿಖೆ ವೇಳೆ, ಆದಿತ್ಯ ಅವರಿಗೆ ರೂ 1 ಕೋಟಿ ನೀಡಿದ್ದಾಗಿ ತಿಳಿಸಿದ್ದ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.