ADVERTISEMENT

ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ

ಪಿಟಿಐ
Published 25 ಮೇ 2018, 19:08 IST
Last Updated 25 ಮೇ 2018, 19:08 IST
ಅರುಣ್‌ ಜೇಟ್ಲಿ (ಸಂಗ್ರಹ ಚಿತ್ರ)
ಅರುಣ್‌ ಜೇಟ್ಲಿ (ಸಂಗ್ರಹ ಚಿತ್ರ)   

ನವದೆಹಲಿ: ಇಲ್ಲಿನ ಏಮ್ಸ್‌ನಲ್ಲಿ ಮೇ 14ರಂದು ಮೂತ್ರಪಿಂಡ ಕಸಿಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಜೇಟ್ಲಿ ಅವರ ದೂರದ ಸಂಬಂಧಿ ಮಹಿಳೆಯೊಬ್ಬರು ಸಚಿವರಿಗೆ ಮೂತ್ರಪಿಂಡ ದಾನ ಮಾಡಿದ್ದಾರೆ ಎಂದು ಏಮ್ಸ್‌ ಮೂಲಗಳು ತಿಳಿಸಿವೆ.

ಅಪೊಲೊ ಆಸ್ಪತ್ರೆಯ ಡಾ. ಸಂದೀಪ್ ಗುಲೆರಿಯಾ, ಶಸ್ತ್ರಚಿಕಿತ್ಸಕ ವಿ.ಕೆ. ಬನ್ಸಾಲ್, ಡಾ. ಸಂದೀಪ್‌ ಮಹಾಜನ್‌ ಹಾಗೂ ಏಮ್ಸ್‌ ನಿರ್ದೇಶಕ ರಂದೀಪ್‌ ಗುಲೇರಿಯಾ ಇದ್ದ 20 ತಜ್ಞ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.