ಭೋಪಾಲ್, (ಪಿಟಿಐ): ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾಗೆ ಸೇರಿದ ವಿಮಾನದಲ್ಲಿ ತಾಂತ್ರಿಕ ತೊಂದರೆ ಉಂಟಾದ್ದರಿಂದ ಅದು ಇಲ್ಲಿನ ರಾಜ ಭೋಜ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಎಐ-634 ಸಂಖ್ಯೆ ಈ ವಿಮಾನದಲ್ಲಿ 70ಜನ ಪ್ರಯಾಣಿಕರಿದ್ದರು. ಹಾರಾಟ ಆರಂಭಿಸಿದ ನಂತರ 15 ನಿಮಿಷಗಳ ಬಳಿಕ ಈ ತೊಂದರೆ ಉಂಟಾಯಿತು.
ಹಠಾತ್ ಎದುರಾದ ಎಂಜಿನ್ ದೋಷ ಸರಿಪಡಿಸಲು ಎಂಜಿನಿಯರ್ಗಳು ವಿಫಲವಾದ್ದರಿಂದ ಈ ವಿಮಾನದ ಸಂಚಾರವನ್ನೇ ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಈ ವಿಮಾನದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಬೇರೆ ವಿಮಾನದ ಮೂಲಕ ಇಂದೋರ್ ಮತ್ತು ಮುಂಬೈಗೆ ಕಳುಹಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.