ADVERTISEMENT

ತುಂಡಾ 7 ದಿನ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಬಂಧನಕ್ಕೊಳ ಗಾ­-ಗಿ­ರುವ ಲಷ್ಕರ್‌–ಎ ತೈಯಬಾದ (ಎಲ್‌ಇಟಿ) ಬಾಂಬ್‌ ತಯಾರಿಕಾ ತಜ್ಞ ಅಬ್ದುಲ್‌ ಕರೀಂ ತುಂಡಾನನ್ನು ಇಲ್ಲಿನ ಕೋರ್ಟ್ 7 ದಿನ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ತುಂಡಾನ ನೆರವು ಪಡೆದಿದ್ದಾರೆ ಎನ್ನಲಾದ ಪಾಕಿಸ್ತಾನದ ಪ್ರಜೆಗಳನ್ನು ಆತ ಇನ್ನಷ್ಟೇ ಗುರುತು ಹಿಡಿಯ­ಬೇಕಾಗಿದೆ ಎಂದು ತನಿಖಾಧಿ­ಕಾರಿಗಳು ಹೇಳಿದ್ದರಿಂದ ಕೋರ್ಟ್ ಆರೋಪಿ­ಯನ್ನು ವಾರದ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.