ADVERTISEMENT

ತೆರಿಗೆ ಕೈಬಿಡಲು ರಜನಿಕಾಂತ್‌ ಮನವಿ

ಪಿಟಿಐ
Published 5 ಜುಲೈ 2017, 19:39 IST
Last Updated 5 ಜುಲೈ 2017, 19:39 IST
ರಜನಿಕಾಂತ್‌
ರಜನಿಕಾಂತ್‌   

ಚೆನ್ನೈ: ಚಿತ್ರೋದ್ಯಮದ ಮೇಲೆ ಸ್ಥಳೀಯಾಡಳಿತ ಸಂಸ್ಥೆಗಳು ವಿಧಿಸುವ ಶೇ 30ರಷ್ಟು ತೆರಿಗೆಯನ್ನು ಕೈಬಿಡಬೇಕು ಎಂದು ಚಿತ್ರನಟ ರಜನಿಕಾಂತ್‌ ತಮಿಳು
ನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ತೆರಿಗೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಚಿತ್ರಮಂದಿರ ಮಾಲೀಕರು ಹಾಗೂ ವಿತರಕರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ತಮಿಳು ಚಿತ್ರೋದ್ಯಮವು ಲಕ್ಷಾಂತರ ಮಂದಿಯ ಬದುಕಿಗೆ ಆಸರೆಯಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.