ನವದೆಹಲಿ (ಪಿಟಿಐ): ತೈಲಾ ಆಮದು ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಶುಕ್ರವಾರ ತಿಳಿಸಿದ್ದಾರೆ.
`ನನಗೆ ಮಾತ್ರವಲ್ಲ ಹಿಂದೆ ಈ ಖಾತೆಯನ್ನು ನಿಭಾಯಿಸಿದ ಎಲ್ಲಾ ಸಚಿವರಿಗೂ ತೈಲ ಮಾಫಿಯಾದಿಂದ ಬೆದರಿಕೆ ಇತ್ತು' ಎಂದು ಮೊಯಿಲಿ ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ತೈಲಾ ಮತ್ತು ಅಡುಗೆ ಅನಿಲದ ಬೆಲೆ ಸ್ಥಿರವಾಗಿಲ್ಲ ಇದಕ್ಕೆ ಮುಖ್ಯ ಕಾರಣ ನಾವು ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿಲ್ಲ ಎಂದರು. ತೈಲಾ ಮಾಫಿಯಾದ ಬೆದರಿಕೆಗಳಿಗೆ ಎದೆಗುಂದದೆ ಕೆಲಸ ನಿರ್ವಹಿಸುತ್ತಿದ್ದೆನೆ ಎಂದು ಮೊಯಿಲಿ ನುಡಿದರು.
2030ರ ವೇಳೆಗೆ ಭಾರತ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು, ಇದ್ದಕ್ಕಾಗಿ ತಾವು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಯಾರು ಬೆದರಿಕೆ ಹಾಕುತ್ತಿದ್ದಾರೆ ಎಂಬ ಬಗ್ಗೆ ಸಚಿವರು ಯಾವುದೇ ಮಾಹಿತಿ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.