ADVERTISEMENT

ದೂಳಿಗೆ ಮುಕ್ತಿ ತಂದ ಮಳೆ

ಪಿಟಿಐ
Published 16 ಜೂನ್ 2018, 19:14 IST
Last Updated 16 ಜೂನ್ 2018, 19:14 IST

ಚಂಡೀಗಡ: ಪಂಜಾಬ್‌, ಹರಿಯಾಣದ ಕೆಲವೆಡೆ ಭಾರಿ ಮಳೆ ಸುರಿದಿದ್ದು, ದೂಳಿನಿಂದ ಪರದಾಡುತ್ತಿದ್ದ ಜನ ನೆಮ್ಮದಿಯಿಂದ ಉಸಿರಾಡುವಂತಾಗಿದೆ.

ಶುಕ್ರವಾರ ರಾತ್ರಿ ಚಂಡೀಗಡ ಸೇರಿದಂತೆ ಎರಡೂ ರಾಜ್ಯಗಳ ಕೆಲ ಭಾಗಗಳಲ್ಲಿ ಮಳೆ ಸುರಿಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದರೂ, ತೀವ್ರ ಧಗೆಯಿಂದ ಸಹ ಜನ ಮುಕ್ತಿ ಪಡೆದಿದ್ದಾರೆ‌.

ಹವಾಮಾನ ವೈಪರೀತ್ಯದಿಂದಾಗಿ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲಾಗಿದೆ. ಭತ್ತದ ಬೆಳೆ ಚೇತರಿಕೆಗೂ ಮಳೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.