ಮುಂಬೈ (ಪಿಟಿಐ): `ಕಪ್ಪು ಕನ್ನಡಕ ಧರಿಸಿದರೂ ಧೃತರಾಷ್ಟ್ರನಲ್ಲ...~ಅಣ್ಣನ ಮಗ ರಾಜ್ ಠಾಕ್ರೆ ಶಿವಸೇನೆಯಿಂದ ಹೊರನಡೆದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಟ್ಟಿದ ಸಂದರ್ಭದಲ್ಲಿ ತಮ್ಮನ್ನು `ಧೃತರಾಷ್ಟ್ರ~ ಎಂದು ಕರೆದಾಗ ಬಾಳ ಠಾಕ್ರೆ ಈ ರೀತಿ ಪ್ರತಿಕ್ರಿಯಿಸಿದ್ದರು.
ಪಕ್ಷದ ಮುಖವಾಣಿ `ಸಾಮ್ನಾ~ಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ರಾಜ್ ನಿರ್ಗಮನದ ಬಗ್ಗೆ ಠಾಕ್ರೆ ಮನಸ್ಸು ಬಿಚ್ಚಿ ಮಾತನಾಡಿದ್ದರು. `ಇಡೀ ಪ್ರಹಸನದಲ್ಲಿ ನಿಮ್ಮನ್ನು ಧೃತರಾಷ್ಟ್ರ ಎಂದು ಕರೆಯಲಾಗುತ್ತದೆ~ ಎಂಬ ಪ್ರಶ್ನೆಗೆ ಇದು ಅವರ ಉತ್ತರವಾಗಿತ್ತು.`ರಾಜ್ ನಿರ್ಗಮನದಿಂದ ನನಗೇನು ದುಃಖವಿಲ್ಲ~ ಎಂದಿದ್ದ ಅವರು, `ಗುಬ್ಬಚ್ಚಿ ಮರಿಗಳು ಗೂಡಿಗೆ ಬರಲೇ ಬೇಕು~ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.