ADVERTISEMENT

ಪವಾರ್‌ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮುಂಬೈ(ಪಿಟಿಐ): ಪ್ರತಿಕೂಲ ಹವಾ­ಮಾನದ ಕಾರಣದಿಂದ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅವರ ಹೆಲಿ­ಕಾಪ್ಟರ್‌ ಅನ್ನು ಭಾನುವಾರ ಬೀಡ್‌ ಜಿಲ್ಲೆ­ಯಲ್ಲಿ ತುರ್ತು ಭೂಸ್ಪರ್ಶ ಮಾಡಿ­ಸ­ಲಾಯಿತು.

‘ಎನ್‌ಸಿಪಿ ಮುಖ್ಯಸ್ಥ ಪವಾರ್‌ ಅವರು ರಾಜಕೀಯ ಸಭೆಯಲ್ಲಿ ಭಾಗ­ವಹಿ­ಸಲು ಉಸ್ಮಾನಾಬಾದ್‌ನಿಂದ ಪರ್ಭಾನಿಗೆ ತೆರಳುತ್ತಿದ್ದರು. ಆದರೆ ಪ್ರತಿ­ಕೂಲಹವಾಮಾನದ ಕಾರಣ­ದಿಂದ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅನ್ನು ಬೀಡ್‌ ಜಿಲ್ಲೆಯ ಅಂಬೆಜೋಗೈನ ಎಸ್‌ಆರ್‌ಟಿ ವೈದ್ಯ­ಕೀಯ ಕಾಲೇಜಿನಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿಸ­ಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.