
ಪ್ರಜಾವಾಣಿ ವಾರ್ತೆಜಾಮ್ನಗರ್(ಪಿಟಿಐ): ಭಾರತೀಯ ಕರಾವಳಿ ಕಾವಲು ಪಡೆ ಏಳು ಮಂದಿ ಪಾಕಿಸ್ತಾನಿಯರನ್ನು ಬಂಧಿಸಿ ದೋಣಿಯೊಂದನ್ನು ಕುಚ್ನ ಜಖಾವ್ ಪಟ್ಟಣದ ಬಳಿಯ ಸಮುದ್ರದಿಂದ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಶುಕ್ರವಾರ ತಡ ರಾತ್ರಿ ಏಳು ಮಂದಿ ಇದ್ದ ಪಾಕಿಸ್ತಾನಿ ದೋಣಿಯೊಂದು ಭಾರತೀಯ ನೀರಿನ ಗಡಿ ಭಾಗಕ್ಕೆ ಬಂದಿದ್ದರಿಂದ ಅವರನ್ನು ವಶದಲ್ಲಿರಿಸಿಕೊಂಡು ವಿಚಾರಣೆಗೆ ಓಖಾಗೆ ಕರೆದೊಯ್ಯಲಾಯಿತು’ ಎಂದು ಭಾರತೀಯ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.