ADVERTISEMENT

ಪೂಂಛ್, ರಜೌರಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್; ಓರ್ವ ಯೋಧ ಹುತಾತ್ಮ, ಬಾಲಕಿ ಸಾವು

ಏಜೆನ್ಸೀಸ್
Published 17 ಜುಲೈ 2017, 8:02 IST
Last Updated 17 ಜುಲೈ 2017, 8:02 IST
ಪೂಂಛ್, ರಜೌರಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್; ಓರ್ವ ಯೋಧ ಹುತಾತ್ಮ, ಬಾಲಕಿ ಸಾವು
ಪೂಂಛ್, ರಜೌರಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್; ಓರ್ವ ಯೋಧ ಹುತಾತ್ಮ, ಬಾಲಕಿ ಸಾವು   

ಶ್ರೀನಗರ: ಸೋಮವಾರ ಬೆಳಗ್ಗೆ ಪೂಂಛ್ ಜಿಲ್ಲೆಯ ಬಾಲಕೋಟ್ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತದ ಓರ್ವ ಯೋಧ ಹುತಾತ್ಮರಾಗಿದ್ದು, 9 ವರ್ಷದ ಬಾಲಕಿ ಗುಂಡಿಗೆ ಬಲಿಯಾಗಿದ್ದಾಳೆ.

ಅದೇ ವೇಳೆ ರಜೌರಿಯ ಮಂಜಾಕೋಟ್ ವಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಜೌರಿಯಲ್ಲಿ ಶೆಲ್ ದಾಳಿ ನಡೆದಿದ್ದು, ಪಾಕ್ ದಾಳಿಗೆ ಭಾರತ ತಕ್ಕ ಪ್ರತಿಕ್ರಿಯೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.