ADVERTISEMENT

ಬಹರೇನ್: ಭಾರತೀಯರ ಸುರಕ್ಷತೆ ಬಗ್ಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:00 IST
Last Updated 30 ಮಾರ್ಚ್ 2011, 19:00 IST
ಬಹರೇನ್: ಭಾರತೀಯರ ಸುರಕ್ಷತೆ ಬಗ್ಗೆ ಭರವಸೆ
ಬಹರೇನ್: ಭಾರತೀಯರ ಸುರಕ್ಷತೆ ಬಗ್ಗೆ ಭರವಸೆ   

ನವದೆಹಲಿ (ಪಿಟಿಐ):   ಬಹರೇನ್‌ನಲ್ಲಿರುವ ಸುಮಾರು 35ಲಕ್ಷ ಭಾರತೀಯರ ಸುರಕ್ಷತೆಯನ್ನು ಕಾಪಾಡುತ್ತೇವೆಂದು ಬಹರೇನ್ ವಿದೇಶಾಂಗ ಸಚಿವ ಶೇಖ್ ಖಾಲೀದ್  ಬಿನ್ ಅಹಮದ್ ಅವರು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ  ಭರವಸೆ ನೀಡಿದರು.

ಭಾರತ ಪ್ರವಾಸದಲ್ಲಿರುವ  ಬಹರೇನ್ ವಿದೇಶಾಂಗ  ಸಚಿವ ಶೇಖ್ ಖಾಲೀದ್ ಅವರು  ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಬುಧವಾರ ಭೇಟಿ ಮಾಡಿ ಬಹರೇನ್‌ಸೇರಿದಂತೆ  ಮಧ್ಯಪ್ರಾಚ್ಯದ ಇತ್ತೀಚಿನ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಿದರು.

ಈ ಮಾತುಕತೆಯ ಸಂದರ್ಭದಲ್ಲಿ ಖಾಲೀದ್ ಅವರು ಬಹರೇನ್ ಅಭಿವೃದ್ಧಿಗೆ ಭಾರತೀಯ ಸಮುದಾಯ ನೀಡಿದ ಕೊಡುಗೆಯನ್ನು  ಸ್ಮರಿಸಿದರು.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.