ADVERTISEMENT

ಬಿಹಾರಕ್ಕೆ ವಿಶೇಷ ಸ್ಥಾನಮಾನ: ನಿತೀಶ್‌ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಪಟ್ನಾ (ಪಿಟಿಐ): ಬಿಹಾರದ ಕುರಿತು ಕೇಂದ್ರ ಸರ್ಕಾರದ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನ­ಮಾನ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜೆಡಿ­(ಯು) ಕೈಗೊಂಡಿರುವ ಸತ್ಯಾಗ್ರಹ­ದಲ್ಲಿ ಮುಖ್ಯಮಂತ್ರಿ  ನಿತೀಶ್‌ ಕುಮಾರ್ ಭಾನುವಾರ ಪಾಲ್ಗೊಂಡರು.

ಜೆಡಿ (ಯು)ನ ಹಿರಿಯ ನಾಯಕರು ಮತ್ತು ಸಚಿವರೊಂದಿಗೆ ತಮ್ಮ ಅಧಿಕೃತ ನಿವಾಸದಿಂದ ಗಾಂಧಿ ಮೈದಾನಕ್ಕೆ ಆಗಮಿಸಿದ ನಿತೀಶ್‌­ಕುಮಾರ್, ಮಹಾತ್ಮ ಗಾಂಧಿ ಪ್ರತಿ­ಮೆಯ ಮುಂದೆ ಧರಣಿ ಕುಳಿತರು.

ಐದು ಗಂಟೆಗಳ ಕಾಲ ಸತ್ಯಾಗ್ರಹ­ದಲ್ಲಿ ಕುಳಿತಿದ್ದ ನಿತೀಶ್‌ಕುಮಾರ್, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ರಾಜ್ಯದ ಜನರೊಂದಿಗೆ ಕೈಗೊಂಡಿರುವ ಈ ಸತ್ಯಾಗ್ರಹ ಯಶಸ್ವಿಯಾಗಲಿದೆ. ಅಭಿವೃದ್ಧಿಗಾಗಿ ಬಿಹಾರವೂ ಕೂಡಾ ವಿಶೇಷ ಸ್ಥಾನಮಾನ ಪಡೆಯಲು ಅರ್ಹತೆ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.