ADVERTISEMENT

ಬ್ಯಾಂಕ್‌ ಖಾತರಿ ನಗದಿಗೆ ಇಟಲಿ ಕೋರ್ಟ್‌ ತಡೆ

ಮೇಲ್ಮನವಿ ಸಲ್ಲಿಸಲು ಭಾರತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಅತಿಗಣ್ಯರಿಗಾಗಿ ಬಳಸಲು ಹೆಲಿ­ಕಾಪ್ಟರ್‌ ಖರೀದಿ ಹಗರ­ಣಕ್ಕೆ ಸಂಬಂಧಿಸಿ­ದಂತೆ ಅಗಸ್ಟಾ ­ವೆಸ್ಟ್‌­­­­ಲ್ಯಾಂಡ್‌ ಕಂಪೆನಿ ನೀಡಿರುವ ₨2360 ಕೋಟಿ ಮೊತ್ತದ ಬ್ಯಾಂಕ್‌ ಖಾತರಿಯನ್ನು ನಗದೀಕರಿಸಿ­ಕೊಳ್ಳುವ ಭಾರತದ ಪ್ರಯತ್ನಕ್ಕೆ ಇಟಲಿ ನ್ಯಾಯಾ­ಲಯ ತಡೆಯಾಜ್ಞೆ ನೀಡಿದೆ.

ಇಟಲಿ ನ್ಯಾಯಾಲಯದ ಈ ಆದೇ­ಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲ­ಯದ ವಕ್ತಾರರು ಮಂಗಳ­ವಾರ ಇಲ್ಲಿ ತಿಳಿಸಿದರು.

ಅತಿಗಣ್ಯರ ಬಳಕೆಗಾಗಿ ಅಗಸ್ಟಾವೆಸ್ಟ್‌ ಲ್ಯಾಂಡ್‌ ಕಂಪೆನಿಯಿಂದ ₨3600 ಕೋಟಿ ಮೌಲ್ಯದ ಹೆಲಿಕಾಪ್ಟರ್‌ಗಳನ್ನು  ಖರೀದಿಸಲು ಭಾರತ ಒಪ್ಪಂದ ಮಾಡಿ­ಕೊಂಡಿತ್ತು. ಆದರೆ ಇದರಲ್ಲಿ ಯಾವುದೇ ಲಂಚದ ವ್ಯವಹಾರ ಇರ­ಬಾರದು ಎಂಬ ಷರತ್ತು  ವಿಧಿಸಿತ್ತು. ಈ ಷರತ್ತು ಉಲ್ಲಂಘಸಿದಕ್ಕಾಗಿ ದಂಡದ ರೂಪದಲ್ಲಿ ಬ್ಯಾಂಕ್‌ ಭದ್ರತೆ ನಗದೀಕರಿ­ಸಿಕೊಳ್ಳಲು ಭಾರತ ಮುಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.