ADVERTISEMENT

ಭಾರತ್‌ ಮಾತಾ ಕಿ ಜೈ ಎನ್ನದವರು ಪಾಕಿಸ್ತಾನಿಗಳು: ಉ.ಪ್ರದೇಶ ಶಾಸಕ

ಪಿಟಿಐ
Published 26 ಫೆಬ್ರುವರಿ 2018, 19:58 IST
Last Updated 26 ಫೆಬ್ರುವರಿ 2018, 19:58 IST

ಬಲಿಯಾ/ ಉತ್ತರಪ್ರದೇಶ: ‘ಭಾರತ್‌ ಮಾತಾ ಕಿ ಜೈ’ ಎನ್ನದವರು ಪಾಕಿಸ್ತಾನಿಗಳು ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

‘2024ರ ಹೊತ್ತಿಗೆ ಭಾರತ ಹಿಂದೂ ರಾಷ್ಟ್ರವಾಗುತ್ತದೆ’ ಎಂದು ಇದೇ ಶಾಸಕರು ಕಳೆದ ತಿಂಗಳು ಹೇಳಿದ್ದರು.

ರಾಟ್ಸಾದ್‌ನಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತ್‌ ಮಾತಾ ಕಿ ಜೈ’, ‘ವಂದೇ ಮಾತರಂ’ ಎನ್ನದವರಿಗೆ ಈ ದೇಶದಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ, ‌ಇಂಥ ಜನರು ರಾಜಕೀಯ ಪ್ರವೇಶಿಸಲು ಅವಕಾಶ ನೀಡಬಾರದು’ ಎಂದರು.

ADVERTISEMENT

‘ತಾಯ್ನಾಡನ್ನು ತಾಯಿಯಂತೆ ಗೌರವಿಸದವರ ದೇಶಭಕ್ತಿಯ ಮೇಲೆ ಅನುಮಾನವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.