ಸೆಹೋರ್: ಕುಟುಂಬದ ಆರ್ಥಿಕ ಬಿಕ್ಕಟ್ಟಿನಿಂದ ಎತ್ತುಗಳನ್ನು ಖರೀದಿಸಲಾಗದ ರೈತ ಜಮೀನಿನಲ್ಲಿ ಜೋಳದ ಬೆಳೆಯಲ್ಲಿ ಎಡೆಕುಂಟೆ ಹೊಡೆಯಲು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಗಲಿಗೆ ನೊಗ ಹೊರಿಸಿದ್ದಾರೆ.
–ಇದು ಮಧ್ಯಪ್ರದೇಶದ ಬಸಂತಪುರಿ ಪಂಗ್ರಿ ಗ್ರಾಮದಲ್ಲಿ ಕಂಡ ದೃಶ್ಯ. 14 ವರ್ಷದ ರಾಧಿಕಾ, 11 ವರ್ಷದ ಕುಂತಿ ಇಬ್ಬರೂ ಹೆಣ್ಣುಮಕ್ಕಳು ಹಣಕಾಸಿನ ಕೊರತೆಯಿಂದ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ದುಡಿಮೆಗಾಗಿ ತಂದೆಯ ಜತೆ ಜಮೀನಿಗಿಳಿದಿದ್ದು, ಸ್ವಂತ ಎತ್ತುಗಳಿಲ್ಲಿದ ಕಾರಣಕ್ಕೆ ನೊಗಕ್ಕೆ ಹೆಗಲುಕೊಟ್ಟಿದ್ದಾರೆ.
ಕುಟುಂಬಕ್ಕೆ ಅಗತ್ಯ ಧಾನ್ಯ ಬೆಳೆಯಲು ಭೂಮಿ ಉಳುಮೆಗೆ ಎತ್ತುಗಳನ್ನು ಖರೀದಿಸಲು ಸಾಕಷ್ಟು ಹಣ ನಮ್ಮ ಬಳಿ ಇಲ್ಲ. ಮಕ್ಕಳು ಸೇರಿದಂತೆ ನಾವೇ ಉಳುಮೆ ಮಾಡುತ್ತಿದ್ದೇವೆ ಎಂದು ಸರ್ದಾರ್ ಕಹ್ಲಾ ಹೇಳಿದ್ದಾರೆ.
‘ಉಳುಮೆಗಾಗಿ ಎತ್ತುಗಳನ್ನು ಖರೀದಿಸಲು ನನಗೆ ಸಾಕಷ್ಟು ಹಣ ಇಲ್ಲ. ಆರ್ಥಿಕ ಕೊರತೆ ಕಾರಣ ನನ್ನ ಇಬ್ಬರು ಪುತ್ರಿಯರು ಶಾಲಾ ಶಿಕ್ಷಣವನ್ನು ತೊರೆದಿದ್ದಾರೆ’ ಎಂದು ರೈತ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.