ADVERTISEMENT

‘ಮಲ್ಯ ಹಾಜರುಪಡಿಸಿದರಷ್ಟೇ ಶಿಕ್ಷೆ ಪ್ರಕಟ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:17 IST
Last Updated 15 ಜುಲೈ 2017, 9:17 IST
‘ಮಲ್ಯ ಹಾಜರುಪಡಿಸಿದರಷ್ಟೇ ಶಿಕ್ಷೆ ಪ್ರಕಟ’
‘ಮಲ್ಯ ಹಾಜರುಪಡಿಸಿದರಷ್ಟೇ ಶಿಕ್ಷೆ ಪ್ರಕಟ’   

ನವದೆಹಲಿ: ‘ಮಕ್ಕಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಾರದು’ ಎಂದು ಕರ್ನಾಟಕ ಹೈಕೋರ್ಟ್‌ನ ಆದೇಶ ಇದ್ದರೂ, ಅದನ್ನು ಉಲ್ಲಂಘಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ‘ಮಲ್ಯ ಅವರನ್ನು ಹಾಜರುಪಡಿಸುವವರೆಗೂ, ಶಿಕ್ಷೆ ಪ್ರಕಟಿಸುವುದಿಲ್ಲ’ ಎಂದು  ಅದು ಹೇಳಿದೆ.

ಇದಕ್ಕೂ ಮುನ್ನ ಅಟಾರ್ನಿ ಜನರಲ್  ಕೆ.ಕೆ.ವೇಣುಗೋಪಾಲ್ ಅವರು, ‘ಬ್ರಿಟನ್‌ನಿಂದ  ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಡಿಸೆಂಬರ್ ವೇಳೆಗೆ  ಪೂರ್ಣಗೊಳ್ಳಬಹುದು’ ಎಂದು ತಿಳಿಸಿದರು.  ಈ ಹಿಂದಿನ ವಿಚಾರಣೆ ವೇಳೆ ಪೀಠವು, ‘ಜುಲೈ 14ರಂದು ಶಿಕ್ಷೆ ಪ್ರಕಟಿಸಲಾಗುವುದು’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT