ADVERTISEMENT

ಮಾನವ ಗುರಾಣಿಯಾಗಿ ಬಳಸಿದ್ದ ವ್ಯಕ್ತಿಗೆ ₹ 10 ಲಕ್ಷ ಪರಿಹಾರ

ಏಜೆನ್ಸೀಸ್
Published 10 ಜುಲೈ 2017, 11:51 IST
Last Updated 10 ಜುಲೈ 2017, 11:51 IST
ಮಾನವ ಗುರಾಣಿಯಾಗಿ ಬಳಸಿದ್ದ ವ್ಯಕ್ತಿಗೆ ₹ 10 ಲಕ್ಷ ಪರಿಹಾರ
ಮಾನವ ಗುರಾಣಿಯಾಗಿ ಬಳಸಿದ್ದ ವ್ಯಕ್ತಿಗೆ ₹ 10 ಲಕ್ಷ ಪರಿಹಾರ   

ಶ್ರೀನಗರ: ಕಲ್ಲುತೂರಾಟಗಾರರಿಂದ ರಕ್ಷಣೆ ಪಡೆಯುವುದಕ್ಕಾಗಿ ಸೇನೆಯು ಮಾನವಗುರಾಣಿಯನ್ನಾಗಿಸಿದ್ದ ಫಾರೂಕ್ ಅಹ್ಮದ್ ದರ್‌ ಅವರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಅಲ್ಲಿನ ಮಾನವಹಕ್ಕು ಆಯೋಗ ಸೂಚಿಸಿದೆ.

ಏಪ್ರಿಲ್ 9ರಂದು ಶ್ರೀನಗರ ಉಪಚುನಾವಣೆ ಸಂದರ್ಭ ದರ್‌ ಅವರನ್ನು ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸಿಕೊಳ್ಳಲಾಗಿತ್ತು. ಸೇನಾಧಿಕಾರಿ ಮೇಜರ್ ಲೀತುಲ್ ಗೊಗೊಯಿ ಅವರು ಈ ಕ್ರಮ ಕೈಗೊಂಡಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.

ಘಟನೆಗೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಪರಿಹಾರ ನೀಡಿದ ಬಗ್ಗೆ ಆರು ವಾರದ ಒಳಗಾಗಿ ವರದಿ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.