ADVERTISEMENT

ಮೂವರು ಸಚಿವರ ಕೈಬಿಟ್ಟ ಮಮತಾ

ಪಿಟಿಐ
Published 5 ಜೂನ್ 2018, 17:22 IST
Last Updated 5 ಜೂನ್ 2018, 17:22 IST

ಕೋಲ್ಕತ್ತ : ಪಶ್ಚಿಮ ಬಂಗಾಳ ಸಂಪುಟದಿಂದ ಮೂವರು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೈಬಿಟ್ಟಿದ್ದಾರೆ.

ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಖಚಿತಪಡಿಸಿರುವ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆಯೂ ಆಗಿರುವ ಮಮತಾ, ‘ಈ ಮೂವರು ಪಕ್ಷದ ಸಂಘಟನಾ ಚಟುವಟಿಕೆ ಮೇಲೆ ಗಮನ ಹರಿಸಲು ಅವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಿಲ್ಲ’ ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗದ ಕಲ್ಯಾಣ ಸಚಿವ ಚೂರಾಮಣಿ ಮಹತೊ, ಗಿರಿಜನ ಅಭಿವೃದ್ಧಿ ಸಚಿವ ಜೇಮ್ಸ್‌ ಕುಜುರ್‌ ಮತ್ತು ಅಬನಿ ಜೊಯಾರ್ಡರ್ (ಖಾತೆ ರಹಿತ ಸಚಿವ) ತಮ್ಮ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ ಎಂದು ರಾಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.