ಶ್ರೀನಗರ: ಎಚ್ಚರ, ಮಹಿಳೆಯರೇ ಎಚ್ಚರ. ನೀವು ಮೊಬೈಲ್ ಬಳಸಿದರೆ ಅಥವಾ ಬುರ್ಖಾ ಇಲ್ಲದೇ ಹೊರ ಬಂದರೇ ನಿಮ್ಮ ಮುಖಕ್ಕೆ ಆ್ಯಸಿಡ್ ಎರಚಲಾಗುತ್ತದೆ ಎಂಬ ಎಚ್ಚರಿಕೆ ಒಳಗೊಂಡ ಭಿತ್ತಿ ಪತ್ರಗಳನ್ನು ದಕ್ಷಿಣ ಕಾಶ್ಮೀರದ ಸೂಫಿಯಾನ್ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಚ್ಚಲಾಗಿದೆ.
ಇಲ್ಲಿವರೆಗೆ ಅಷ್ಟೇನೂ ಪರಿಚಿತವಲ್ಲದ ಅಲ್ ಖೈದಾ ಮುಜಾಹಿದ್ದೀನ್ ಎಂಬ ಸಂಘಟನೆ ಹೆಸರು ಈ ಭಿತ್ತಿ ಪತ್ರಗಳಲ್ಲಿ ಇದೆ. ಯುವತಿಯರು ಮೊಬೈಲ್ ಬಳಸಿದಲ್ಲಿ ಗುಂಡು ಹಾರಿಸಲಾಗುವುದು ಎಂಬ ಸಾಲುಗಳೂ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.