ನವದೆಹಲಿ (ಪಿಟಿಐ/ಐಎಎನ್ಎಸ್): `ವಿದ್ಯಾರ್ಥಿನಿಯ ನಾಡಿ ಮಿಡಿತ ಮಂಗಳವಾರ ರಾತ್ರಿ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಆತಂಕವಾಗಿತ್ತು' ಎಂದು ವೈದ್ಯರು ತಿಳಿಸಿದ್ದಾರೆ.
`ವಿದ್ಯಾರ್ಥಿನಿಗೆ ಕೃತಕ ಉಸಿರಾಟ ವ್ಯವಸ್ಥೆ ಮುಂದುವರಿಸಲಾಗಿದೆ. ಆಕೆಯ ದೇಹ ಸ್ಥಿತಿ ಗಂಭೀರವಾಗಿಯೇ ಇದೆ' ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಪ್ರಮುಖರ ಸಭೆ: ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಅವಲೋಕಿಸಲು ಕಾಂಗ್ರೆಸ್ ಪ್ರಮುಖರು ಬುಧವಾರ ಮತ್ತೊಮ್ಮೆ ಸಭೆ ಸೇರಿದ್ದರು.
ಎಎಪಿ ಆರೋಪ: `ತೋಮರ್ ಸಾವಿನ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುವ ಹುನ್ನಾರ ನಡೆದಿದೆ' ಎಂದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ದೂರಿದ್ದಾರೆ.
ವರ್ಮಾ ಸಮಿತಿ ಸಭೆ: ಮಹಿಳೆಯ ಮೇಲಿನ ದೌರ್ಜನ್ಯ ತಡೆ ಕುರಿತಂತೆ ಈವರೆಗೆ ಇ-ಮೇಲ್ ಮೂಲಕ 6,100 ಸಲಹೆಗಳು ಬಂದಿವೆ ಎಂದು ನ್ಯಾಯಮೂರ್ತಿ ವರ್ಮಾ
ಸಮಿತಿಯು ತಿಳಿಸಿದೆ. ಬುಧವಾರ ಸಮಿತಿಯ ಮೊದಲ ಸಭೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.