ತಿರುವನಂತಪುರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ಬೇರೆಯವರಿಗೆ ಆ ಜವಾಬ್ದಾರಿಯನ್ನು ಬಿಟ್ಟುಕೊಡುವುದು ಒಳಿತು ಎಂದು ಯುವ ಕಾಂಗ್ರೆಸ್ ಮುಖಂಡ ಸಿ. ಆರ್. ಮಹೇಶ್ ಹೇಳಿದ್ದಾರೆ.
‘ಗೌರವಾನ್ವಿತ ರಾಹುಲ್ ಗಾಂಧಿ ಅವರೆ, ನಿಮಗೆ ಪಕ್ಷವನ್ನು ಮುನ್ನಡೆಸುವ ಮನಸಿಲ್ಲದಿದ್ದರೆ ದಯವಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಿ, ದೇಶದ ಎಲ್ಲಾ ಭಾಗದಲ್ಲೂ ಭದ್ರ ತಳಹದಿ ಇದ್ದ ದೊಡ್ಡ ಪಕ್ಷ ಈಗ ನೆಲ ಕಚ್ಚಿದೆ’ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಹೇಶ್ ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಮಾಜಿ ರಕ್ಷಣಾ ಸಚಿವ ಮತ್ತು ಹಿರಿಯ ಮುಖಂಡ ಎ. ಕೆ. ಆ್ಯಂಟನಿ ಅವರು ಮೌನ ಮುರಿದು ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.