ADVERTISEMENT

ಶರದ್‌ ಕುಮಾರ್‌ ಸಿವಿಸಿ ಆಯುಕ್ತ

ಪಿಟಿಐ
Published 10 ಜೂನ್ 2018, 19:35 IST
Last Updated 10 ಜೂನ್ 2018, 19:35 IST

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಾಜಿ ಮುಖ್ಯಸ್ಥ ಶರದ್‌ ಕುಮಾರ್‌ (62) ಅವರನ್ನು ಕೇಂದ್ರ ಜಾಗೃತ ದಳದ (ಸಿವಿಸಿ) ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಸ್ಥಾನವು ಕಳೆದ ಫೆಬ್ರುವರಿಯಿಂದ ಖಾಲಿ ಉಳಿದಿತ್ತು.

ಶರದ್‌ ಅವರು ಹರಿಯಾಣ ಕೇಡರ್‌ನ 1979ನೇ ತಂಡದ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ಎನ್‌ಐಎ ಮುಖ್ಯಸ್ಥರಾಗಿ ನಾಲ್ಕು ವರ್ಷಗಳು ಸೇವೆ ಸಲ್ಲಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT