ADVERTISEMENT

ಸನ್ಯಾಸಿನಿ ಅತ್ಯಾಚಾರ ಆರೋಪಿಗೆ 11 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಕಟಕ್‌ (ಪಿಟಿಐ): ಒಡಿಶಾದ ಕಂಧಮಲ್‌ನಲ್ಲಿ 2008ರಲ್ಲಿ    ಕೋಮು ಗಲಭೆ ವೇಳೆ   ಕ್ರೈಸ್ತ ಸಂನ್ಯಾಸಿನಿ ಮೇಲೆ ನಡೆದ ಅತ್ಯಾ­ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ತಪ್ಪಿತಸ್ಥರೆಂದು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ. ಸಾಕ್ಷ್ಯಾ­ಧಾರ­ಗಳ ಕೊರತೆಯಿಂದ  ಇನ್ನುಳಿದ ಆರು ಜನರನ್ನು  ನ್ಯಾಯಾ­ಲಯ ಖುಲಾಸೆ ಮಾಡಿದೆ. 

ಸೆಷನ್ಸ್‌ ನ್ಯಾಯಾಧೀಶರಾದ ಜ್ಞಾನ ರಂಜನ್‌ ಪುರೋಹಿತ್‌ ಅವರು  ಪ್ರಮುಖ ಆರೋಪಿ  ಮಿಟ್ಟು ಪಟ್ನಾಯಕ್‌್ ಅಲಿಯಾಸ್‌್  ಸಂತೋಷ್‌ ಪಟ್ನಾಯಕ್‌ಗೆ 11 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₨ 10,000 ದಂಡ ವಿಧಿಸಿದ್ದಾರೆ. ಗಜೇಂದ್ರ ಡಿಗಲ್‌ ಹಾಗೂ ಸರೋಜ್‌ ಬಹ್‌ದೇಯಿಗೆ 26 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪೊಲೀಸರು 24ಕ್ಕೂ ಹೆಚ್ಚು
ಜನರನ್ನು ಬಂಧಿಸಿ ವಿಚಾರಣೆ­ಗೊಳಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.