ನವದೆಹಲಿ: ಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊರಾಯ್ ಅವರಿಗೆ ಬಾರೀ ಹಿನ್ನಡೆಯಾಗಿದ್ದು, ಲೊನಾವಾಲದಲ್ಲಿರುವ 39,000 ಕೋಟಿ ಮೌಲ್ಯದ ಅಂಬೆ ವ್ಯಾಲಿ ಆಸ್ತಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಈ ಹರಾಜು ಪ್ರಕ್ರಿಯೆಗಾಗಿ ಬಾಂಬೆ ಹೈಕೋರ್ಟ್ನ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಅಲ್ಲದೇ ಸುಬ್ರತೊರಾಯ್ ಅವರು ಈ ತಿಂಗಳ 28ರೊಳಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.
ಸಹಾರಾ ಸಮೂಹವು ಏಪ್ರಿಲ್ 17ರೊಳಗೆ ₹5.092.6 ಕೋಟಿ ಠೇವಣಿ ಇಡಲು ವಿಫಲವಾದ ಹಿನ್ನೆಲೆಯಲ್ಲಿ ಅಂಬೆ ವ್ಯಾಲಿ ಆಸ್ತಿಯನ್ನು ಹರಾಜು ಹಾಕುವಂತೆ ಸೂಚಿಸಿದೆ.