ನವದೆಹಲಿ(ಐಎಎನ್ಎಸ್): ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್ ಇನ್ನೂ ಕೆಲವು ಕಾಲ ತಿಹಾರ್ ಜೈಲಿನಲ್ಲೇ ಕಳೆಯಬೇಕಾಗಿದೆ. ಕಾರಣ, ದೇಶಬಿಟ್ಟು ಹೋಗುವುದಿಲ್ಲ ಎಂಬ ವಾಗ್ದಾನದೊಂದಿಗೆ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಸ್. ಕೇಹರ್್ ಅವರನ್ನು ಒಳಗೊಂಡ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಸಮರ್ಥಿಸಿಕೊಂಡಿತ್ತು. ಇದೇ ವೇಳೆ ಹೂಡಿಕೆದಾರರಿಗೆ ನೀಡಲು ಸೆಬಿಗೆ ₨19,000 ಕೋಟಿ ಪಾವತಿ ನೀಡಲು ಸುಬ್ರತೊ ಅವರಿಂದ ಯಾವು ದಾದರೂ ಪ್ರಸ್ತಾವಗಳಿವೆಯೇ ಎಂದು ವಕೀಲ ರಾಂ ಜೇಠ್ಮಲಾನಿ ಅವರನ್ನು ಪ್ರಶ್ನಿಸಿತು.
ರಾಯ್ ಹಾಗೂ ಸಹಾರಾ ಸಮೂ ಹದ ಇಬ್ಬರು ನಿರ್ದೇಶಕರ ಬಿಡುಗಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾ.25ಕ್ಕೆ ಮುಂದೂಡಿತು. ಈ ವೇಳೆ ವಕೀಲ ಜೇಠ್ಮಲಾನಿ ರಾಯ್ ₨25,000 ಕೋಟಿ ಮರುಪಾವತಿಸಲು ಸಿದ್ಧರಿರುವುದಾಗಿ ಹೇಳಿದರು. ಆದರೆ ಈ ಪ್ರಸ್ತಾವವನ್ನು ಪೀಠ ತಿರಸ್ಕರಿಸಿತು. ಇದೇ ರೀತಿ ಪ್ರಸ್ತಾವವನ್ನು ಸಹಾರಾ ಸಮೂಹವು ಮಾ.7 ರ ವಿಚಾರಣೆಯಲ್ಲಿ ಮುಂದಿಟ್ಟಿತ್ತು.
ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬದಲ್ಲಿ ಭಾಗಿಯಾಗಲು ಮತ್ತು ಅನಾರೋಗ್ಯ ಪೀಡಿತ ತಮ್ಮ ತಾಯಿ ಯನ್ನು ನೋಡಿಕೊಳ್ಳಲು ರಾಯ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜೇಠ್ಮಲಾನಿ ನ್ಯಾಯಾ ಲಯವನ್ನು ಕೋರಿದರು. ಆದರೆ ಇದನ್ನು ನ್ಯಾಯಮೂರ್ತಿಗಳ ಮಾನ್ಯ ಮಾಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.