ನವದೆಹಲಿ (ಪಿಟಿಐ): ಆರುಷಿ ಮತ್ತು ತಮ್ಮ ಮನೆ ಕೆಲಸದಾಳು ಹೇಮರಾಜ್ ಹತ್ಯೆ ಪ್ರಕರಣವನ್ನು ಗಾಜಿಯಾಬಾದ್ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸುವಂತೆ ಪ್ರಕರಣದ ಆರೋಪಿಗಳೂ ಆದ ಆರುಷಿ ಪೋಷಕರ ಕೋರಿಕೆಯನ್ನು ಸಿಬಿಐ ವಿರೋಧಿಸಿದೆ. ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಸುಪ್ರೀಂ ಕೋರ್ಟ್ಗೆ ಈ ಮನವಿ ಮಾಡಿಕೊಂಡಿದ್ದರು.
`ಪ್ರಕರಣವನ್ನು ವರ್ಗಾಯಿಸುವಂತೆ ಕೋರುತ್ತಿರುವ ಆರೋಪಿಗಳಿಗೆ ಗೂಢ ಉದ್ದೇಶಗಳು ಇದ್ದಂತಿದೆ~ ಎಂದು ಸಿಬಿಐ, ನ್ಯಾಯಮೂರ್ತಿ ಬಿ.ಎಸ್ ಚೌಹಾಣ್ ನೇತೃತ್ವದ ನ್ಯಾಯಪೀಠಕ್ಕೆ ತನ್ನ ಆಕ್ಷೇಪ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.