ADVERTISEMENT

ಸ್ಟೆರಲೈಟ್‌ ಕಾರ್ಖಾನೆ ಮುಚ್ಚುವಂತೆ ಧ್ವನಿಯೆತ್ತಿದ ತಮಿಳುನಾಡಿನ ಹಳ್ಳಿಗರು

ಏಜೆನ್ಸೀಸ್
Published 26 ಮೇ 2018, 4:37 IST
Last Updated 26 ಮೇ 2018, 4:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೂತ್ತುಕುಡಿ(ತಮಿಳುನಾಡು): ತೂತ್ತುಕುಡಿಯಲ್ಲಿರುವ ಸ್ಟೆರಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ತಕ್ಷಣ ಮುಚ್ಚುವಂತೆ ಇಲ್ಲಿನ ಕುಮರೆಡ್ಡಿಯಾಪುರ ಮತ್ತು ಮಿಲವಿತ್ತನ್‌ ಗ್ರಾಮದ ನಿವಾಸಿಗಳು ಧ್ವನಿಯೆತ್ತಿದ್ದಾರೆ.

‘ಇಲ್ಲಿ ಕಾರ್ಖಾನೆಗಳು ಆರಂಭವಾದಾಗಿನಿಂದ ಸುತ್ತಲಿನ ಊರುಗಳ ಜಲಮೂಲಗಳು ಕಲುಷಿತಗೊಂಡಿದೆ. ನಾವು ಮಾಲಿನ್ಯಯುಕ್ತ ನೀರನ್ನೇ ಬಳಸುವಂತಾಗಿದೆ. ಸ್ಟೆರಲೈಟ್‌ ಘಟಕವನ್ನು ಸಂಪೂರ್ಣವಾಗಿ ಬಂದ್‌ ಮಾಡುವಂತೆ ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೆ, ಅಧಿಕಾರಿಗಳು ಮಾತ್ರ ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ’ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT