ADVERTISEMENT

ಸ್ಫೋಟ: ರಾಜ್ಯಸಭೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ನವದೆಹಲಿ (ಪಿಟಿಐ): ಬೋಧಗಯಾ ಸರಣಿ ಸ್ಫೋಟ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ನಕ್ಸಲೀಯರ ದಾಳಿ ಪ್ರಕರಣಗಳನ್ನು ಖಂಡಿಸುವ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಕೈಗೊಂಡಿತು.

ಬೌದ್ಧರಿಗೆ ಅತಿಪವಿತ್ರವಾದ, ವಿಶ್ವ ಪರಂಪರೆಯ ತಾಣ ಬೋಧಗಯಾ ದೇಗುಲದ ಮೇಲೆ ಜುಲೈ 7ರಂದು ನಡೆದ ದಾಳಿ ಖಂಡನೀಯ. ಜತೆಗೆ 27 ಜನ ಬಲಿ ತೆಗೆದುಕೊಂಡ ಛತ್ತೀಸ್‌ಗಢದ ನಕ್ಸಲ್ ಹತ್ಯಾಕಾಂಡ ಖಂಡನೀಯ ಎಂದ ಸಭಾಪತಿ ಹಮೀದ್ ಅನ್ಸಾರಿ ಈ ಸಂಬಂಧ ನಿರ್ಣಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.