ಚೆನ್ನೈ: ದಿಢೀರ್ ಮತ್ತು ಮಹತ್ವದ ಬೆಳವಣಿಗೆಯೊಂದರಲ್ಲಿ ರಾಸಲೀಲೆ ಆರೋಪ ಹೊತ್ತಿರುವ ಬೆಂಗಳೂರು ಬಳಿ ಆಶ್ರಮ ಹೊಂದಿರುವ ಸ್ವಾಮಿ ನಿತ್ಯಾನಂದಅವರ ಆಪ್ತ ಲೆನಿನ್ ಕರುಪ್ಪನ್ ಇಲ್ಲಿನ ಅಪರಾಧ ವಿಭಾಗದ ಸಿಐಡಿ ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ.
ಸ್ವಾಮಿನಿತ್ಯಾನಂದ ಚಿತ್ರ ನಟಿಯೊಬ್ಬರೊಂದಿಗೆ ಸರಸ- ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯಗಳನ್ನು ಚಿತ್ರೀಕರಣ ಮಾಡುವಲ್ಲಿ ಲೆನಿನ್ ಕರುಪ್ಪನ್ ಅವರ ಪಾತ್ರವೂ ಇದೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.